Sunday 14 April 2013

ಹೊರಟೆ ಸೇರೆ ನಮ್ಮ ಊರ ನಿಮಗೆ ನನ್ನ ನಮಸ್ಕಾರ



ಕನ್ನಡ, ತುಳು, ತಮಿಳು, ತೆಲುಗು, ಮಲೆಯಾಳ, ಕೊಂಕಣಿ , ಸಂಸ್ಕೃತ, ಹಿಂದಿ ಇತ್ಯಾದಿ ಭಾಷೆಗಳ ರಚನೆಗಳನ್ನು ಆಯಾ ಭಾಷಿಗರೇ ನಾಚುವಷ್ಟು ಸಹಜವಾಗಿ ಹಾಡುತ್ತಿದ್ದ, ಅದ್ಭುತ ಉಸಿರಿನ ನಿಯಂತ್ರಣ, ಧ್ವನಿ ಭಾರ, ಮಂದ್ರದ ಜೀರು, ಸ್ಪಷ್ಟ ಉಚ್ಚಾರಗಳ ಒಡೆಯ, ಗಾನೆ ಗಾನೆ ಪೆ  ಲಿಖಾ ಹೈ ಗಾನೆ ವಾಲೆ ಕಾ ನಾಮ್ ಅನ್ನುತ್ತಾ ಕೊನೆ ಉಸಿರಿನವರೆಗೂ ಉಲ್ಲಾಸಪೂರ್ಣ ಜೀವನ ನಡೆಸಿ ಇಂದು ಪಂಚತ್ವವನ್ನು ಹೊಂದಿದ    ಗಾನ ಗಂಧರ್ವ ಪಿ.ಬಿ ಶ್ರೀನಿವಾಸ್ ಅವರಿಗೆ  ಆಯ್ದ ಐದು ಹಾಡುಗಳ ಪಂಚ  ಗಾನ ನಮನ.  ಭೌತಿಕವಾಗಿ ಇನ್ನು ಅವರನ್ನು ನಾವು ಕಾಣಲಾರೆವಾದರೂ ನಮ್ಮೆಲ್ಲರ ಮನಗಳಲ್ಲಿ ನೆಲೆಯಾಗಿರುವ ಸಹಸ್ರಾರು ಹಾಡುಗಳ ಮೂಲಕ ಅವರು ಸದಾ ನಮ್ಮೊಂದಿಗೆ ಇರುತ್ತಾರೆ. 70ರ ದಶಕದ ಮಧ್ಯಭಾಗದಲ್ಲಿ  ಕ್ಷಮತೆಯ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗ ಅವರನ್ನು ಕಡೆಗಣಿಸತೊಡಗಿ  ಇನ್ನಷ್ಟು ಮಧುರ ಗೀತೆಗಳು ನಮ್ಮದಾಗುವ ಅವಕಾಶ ತಪ್ಪಿ ಹೋದ ದುರಂತ ಮಾತ್ರ ಮರೆಯಲಾಗದ್ದು.

1.  ನವಜೀವನ ಚಿತ್ರದ ಸರ್ವ ಧರ್ಮ ಸಮನ್ವಯದ ಪ್ರಾರ್ಥನೆ.



2.  ಬದುಕಿದೆನು ಬದುಕಿದೆನು - ಭಕ್ತ ಕನಕದಾಸ



3.  ತೂಗುದೀಪವಿದು  ನಿಜ ಬಾಳಿನ ರೂಪವಿದು -  ತೂಗುದೀಪ



4.  ನಾ ಪಾಪವದೇನ ಮಾಡಿದೆನೊ - ಓಹಿಲೇಶ್ವರ



5.  ಸಂತ ತುಕಾರಾಂ ಚಿತ್ರದ ಹೊರಟೆ ಸೇರೆ ನಮ್ಮ ಊರ ನಿಮಗೆ ನನ್ನ ನಮಸ್ಕಾರ  ಹಾಗೂ  ಶಿವ ಕ್ಷಮಾಪಣಾ ಸ್ತೋತ್ರ



ಇನ್ನಷ್ಟು ಆಯ್ದ ಪಿ.ಬಿ.ಎಸ್ ಹಾಡುಗಳಿಗೆ  ವಿವಿಧ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಪಿ.ಬಿ.ಎಸ್ Top 10 ಮತ್ತು  ಮಂದ್ರದಲ್ಲಿ ಪಿ.ಬಿ.ಎಸ್ ಮಾಂತ್ರಿಕತೆ  ನೋಡಿ.

No comments:

Post a Comment

Your valuable comments/suggestions are welcome